ದಕ್ಷಿಣ-ಪಶ್ಚಿಮ ರೈಲ್ವೇ ವಲಯ ಎಂದೇ ಕರೆಯಲ್ಪಡುವ ನೈರುತ್ಯ ರೈಲ್ವೇ ವಲಯ ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿದ್ದು, ಬೆಂಗಳೂರು, ಮೈಸೂರು ಮುಂತಾದ ಕರ್ನಾಟಕದ ಮುಖ್ಯ ರೈಲ್ವೇ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು
ಸ್ಥಾಪಿತಗೊಂಡಿರುವುದಾಗಿದೆ. ಕರ್ನಾಟಕದಲ್ಲಿನ ರೈಲ್ವೇ ಸಂಪರ್ಕಗಳು,
ವ್ಯವಸ್ಥೆಗಳು, ಅವುಗಳ ನಿರ್ವಹಣೆ ಮತ್ತು ವಿಸ್ತರಣೆ ಈ ವಲಯದ ಕಾರ್ಯವ್ಯಾಪ್ತಿಗೆ
ಬರುವಂತವುಗಳಾಗಿವೆ. ಹೀಗಾಗಿ ಇಲ್ಲಿ ದೊರಕುವ ಸೇವೆಗಳು, ಹುಟ್ಟುವ ಉದ್ಯೋಗಗಳು
ಎಲ್ಲವೂ ಕನ್ನಡ ಕೇಂದ್ರಿತವಾಗಿಯೇ ಮತ್ತು ಕನ್ನಡಿಗನಿಗೆ ಲಾಬದಾಯಕವಾಗಿಯೇ ಇರಬೇಕಾಗಿರುವುದು ಒಕ್ಕೂಟ
ವ್ಯವಸ್ಥೆಯ ದ್ರುಶ್ಟಿಯಿಂದ ಸರಿಯಾದ ನಡೆಯಾಗಿದೆ. ಆದರೆ ಈ ವಲಯದ ವ್ಯವಸ್ಥೆ ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ರೈಲುಗಳಲ್ಲಿ ಹಿಂದಿ ನಾಮಫಲಕಗಳು ರಾರಾಜಿಸುತ್ತವೆ. ಕರ್ನಾಟಕಕ್ಕೆ ಬರುವ ರೈಲಿನಲ್ಲೂ ಸ್ಥಳೀಯ ಬಾಶೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಹಿಂದಿಯನ್ನು ಮೊದಲ ಸ್ಥಾನದಲ್ಲಿ ಹಾಕಲಾಗಿದೆ. ಇಂಗ್ಲೀಶ ಜೊತೆಗೆ ಕನ್ನಡದಲ್ಲೇ ಇರಬೇಕಾಗಿದ್ದ ದಕ್ಷಿಣ-ಪಶ್ಚಿಮ ರೈಲ್ವೇ ವಲಯದ ಮಿಂಬಲೆಯಲ್ಲಿ ಕಾಣುತ್ತಿರುವ ಆಯ್ಕೆ ಮಾತ್ರ ಹಿಂದಿ ಒಂದೇ.! ಇಂತ ಘನ ಕಾರ್ಯಗಳಿಗೆ ನಮಗೆ ಒಂದು ರೈಲ್ವೇ ವಲಯ ಬೇಕಾಗಿತ್ತೇ.? ಈಚೆಗೆ ೨ ವರುಶಗಳ ಹಿಂದೆ, ಈ ವಲಯದ ಮೂಲಕ ನಡೆಯುತ್ತಿದ್ದ ರೈಲ್ವೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಜಾಹೀರಾತು,
ಪರೀಕ್ಷೆ ಬರೆಯುವ ಮಾದ್ಯಮ ಎಲ್ಲ ಹಿಂದಿಮಯವಾಗಿತ್ತು. ಹೀಗಾಗಿ
ಸಹಜವಾಗಿ ಹಿಂದಿ ಬಲ್ಲವರಿಗೆ ಅನುಕೂಲ ವಾತಾವರಣ ನಿರ್ಮಾಣವಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಇಚ್ಚಾಶಕ್ತಿಯ ಫಲವಾಗಿ ನೇಮಕಾತಿ
ಪ್ರಕ್ರಿಯೆಯಲ್ಲಿ ಕನ್ನಡವನ್ನು ಅನುಷ್ಟಾನಗೊಳಿಸಿ, ಕನ್ನಡಿಗರಿಗೆ ರೈಲ್ವೇಯಲ್ಲಿ
ಉದ್ಯೋಗದ ಅವಕಾಶಗಳು ಸಿಗುವಂತಾಗಿದೆ. ಇದು ಕೇಂದ್ರ ಸರಕಾರದ ಇಲಾಖೆ ಎಂಬ ವಾದವನ್ನು ಮುಂದಿಟ್ಟುಕೊಂಡು,
ಬಾರತದ ಏಕೈಕ ಆಡಳಿತ ಬಾಶೆಯೆಂಬ ಅಸ್ತ್ರವನ್ನು ಬಳಸಿಕೊಂಡು, ಈ ವಲಯದ ಸೇವೆಯನ್ನು ಬಳಸುವವರು ಕನ್ನಡಿಗರೇ ಆಗಿದ್ದರೂ, ಸೇವೆಯಲ್ಲಿ
ವ್ಯವಸ್ಥಿತವಾಗಿ ಹಿಂದಿ ಹೇರಿಕೆಯ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು
ಅವಮಾನಿಸುವಂತ ಇಂತಹ ವ್ಯವಸ್ಥೆಯನ್ನು ಕೇಂದ್ರ ಸರಕಾರ ಪೋಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.!
ತಾಣವಿದೆ. ಆ ತಾಣದಲ್ಲಿ ಇಂಗ್ಲೀಶನಲ್ಲಿ ಮಾತ್ರವಲ್ಲದೇ
ಅನೇಕ ಬಾಶೆಗಳಲ್ಲಿ ಮಾಹಿತಿ ಸಿಗುತ್ತದೆ. ಇನ್ನು ಇತರ ಮುಂದುವರೆದ ದೇಶಗಳಾದ
ಜಪಾನ್,
ಚೀನಾ, ಕೋರಿಯಾ,
ಫ್ರಾನ್ಸ್,
ಸ್ವೀಡನ್, ಡೆನ್ಮಾರ್ಕ್
ಹೀಗೆ ಅನೇಕ ದೇಶಗಳ ಮಿಂಬಲೆಗಳಿಗೆ ಬೇಟಿ ಕೊಟ್ಟಾಗ ಕಂಡು ಬಂದಿದ್ದು, ಎಲ್ಲರಿಗೂ ಅವರದೇ ಬಾಶೆಯಲ್ಲಿ
ಮಾಹಿತಿ, ಸೇವೆ ಸಿಗುತ್ತಿದೆ. ಅನೇಕ ಬಾಶೆಗಳಿರುವ
ಯುರೋಪಿನ ರೈಲು ವ್ಯವಸ್ಥೆಯಲ್ಲಿ ಇಂಗ್ಲೀಶ್ ಜೊತೆಗೆ ಬರೀ ಸ್ಪ್ಯಾನಿಶನಲ್ಲಿ ಮಾಹಿತಿ ಕೊಟ್ಟರೆ,
ಅದು ಹೇಗೆ ಇತರ ಸಮುದಾಯದ ಜನರಿಗೆ ಅನುಕೂಲವಾಗದೇ ಹೇರಿಕೆಯಾಗಿ ಕಾಣಿಸುತ್ತದೋ ಅದೇ
ಥರ ಬಾರತೀಯ ರೇಲ್ವೇ ಇಲಾಖೆಯಲ್ಲಿ ಕೇವಲ ಹಿಂದಿಯಲ್ಲಿ ಮಾಹಿತಿ ಕೊಡುವುದು ಇತರ ಸಮುದಾಯದ ಜನರಿಗೆ ಅದು
ಹೇರಿಕೆ ಅಲ್ಲದೇ ಮತ್ತೇನೂ ಅಲ್ಲ.! ಯುರೋಪದಲ್ಲೂ
ಒಕ್ಕೂಟ ವ್ಯವಸ್ಥೆ ಇದೆ, ಆದರೆ ಅಲ್ಲಿ ಜರ್ಮನ್
ಬಾಶೆಯನ್ನು ಫ್ರೇಂಚನವರ ಮೇಲೆ ಹೇರೊದು
ಆಗ್ಲಿ, ಅಥವಾ ಸ್ಪೇನ್ ಬಾಶೆಯನ್ನು ಇಟಲಿಯವರ ಮೇಲೆ ಹೇರೊದು ಆಗ್ಲಿ,, ಆಗಿಲ್ಲ. ನಮ್ಮಲ್ಲಿ ಮಾತ್ರ
ಯಾಕೆ.? ಅಲ್ಲಿಯವರಿಗೆ ಯುರೋಪ್ ಸುತ್ತಾಡೊಕೆ ಇಂಗ್ಲೀಶ ಬಿಟ್ಟು ಬೇರೆ ಒಂದು ಸಂವಹನ ಬಾಶೆ ಬೇಕು ಅಂತ
ಯಾವತ್ತೂ ಅನ್ನಿಸಿಲ್ಲ, ನಮ್ಮಲ್ಲಿ ಎಲ್ಲರಿಗೂ ಹೀಗೆಯೇ ಅನ್ನಿಸುತ್ತದೆ.
ಯಾಕೆ.? ಕೆಲವರು ವಾದಿಸಬಹುದು ಯುರೋಪಿನಲ್ಲಿ ಇರುವವು
ದೇಶಗಳು, ಬಾರತದಲ್ಲಿ ಇರುವವು ರಾಜ್ಯಗಳು, ಹೀಗಾಗಿ
ದೇಶಕ್ಕೊಂದು ಬಾಶೆ ಬೇಕು ಎಂದು. ಈ ಸಂದೇಹಕ್ಕೆ ಸ್ಪಶ್ಟನೆ ಸರಳವಾಗಿದೆ.
ಇಲ್ಲಿ ದೇಶ, ರಾಜ್ಯ ಎಂದು ನೋಡುವುದಕ್ಕಿಂತ ಅವುಗಳನ್ನು
ಒಂದು ಬಾಶೆ ಮಾತನಾಡುವ ಸಮುದಾಯ (ಜನಾಂಗ) ವಾಸಿಸುವ
ಪ್ರದೇಶವಾಗಿ ನೋಡುವುದು ಹೆಚ್ಚು ಸೂಕ್ತ. ಹೀಗಾಗಿ ದೇಶ, ರಾಜ್ಯ ಎನ್ನುವುದಕ್ಕಿಂತ, ಆಯಾ ಪ್ರದೇಶದ ಜನರಿಗೆ ಎಲ್ಲ ಮಾಹಿತಿ,
ಸೇವೆ, ಮನರಂಜನೆ ತಮ್ಮ ನುಡಿಯಲ್ಲಿ ಸಿಗುತ್ತಿದೆಯೋ ಇಲ್ಲವೋ
ಎಂಬುದು ಮುಖ್ಯ. ಆಯಾ ಬಾಶೆಯ ಅಸ್ಮಿತೆಗೆ ದಕ್ಕೆ ಆಗುವಂತ ಪರಬಾಶಾ ಹೇರಿಕೆಯನ್ನು
ಖಂಡಿಸಬೇಕಾದುದು ಸದ್ಯದ ನಡೆ.
ಹೊರರಾಜ್ಯಗಳಿಗೆ ಹೊಗುವವರು ಅಲ್ಲಿಯ ಬಾಶೆ ಯಾಕೆ ಕಲೀಬೇಕು,
ಅಲ್ಲಿ ಬಾಶೆನೇ
ಬೇಡ ಅಂದಮೇಲೆ ಅಲ್ಲಿನ ಸಂಸ್ಕ್ರುತಿ, ಸಂಪ್ರದಾಯಗಳು ಯಾಕೆ ಬೇಕು. ಇಂಥ ಪರಿಸ್ಥಿತಿ ನಿರ್ಮಾಣ ಆದರೆ ಭವ್ಯ
ಭಾರತದಲ್ಲಿ ವಿವಿಧತೆ ಅನ್ನೋದು ಇತಿಹಾಸ ಪುಟ ಸೇರುತ್ತೆ. ವಿವಿಧತೆ ಇಲ್ಲದ
ಮೇಲೆ ಏಕತೆ ಎಲ್ಲಿಂದ.? ಆದ್ದರಿಂದ ನಮ್ಮ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು
ವಿರೋದಿಸೋಣ. ಅಸಮಾನತೆಯ ಬೀಜವನ್ನು ಬಿತ್ತುವಂತ
ಹಿಂದಿ ಸಪ್ತಾಹ, ಸೆಪ್ಟೆಂಬರ್ ೧೪ ರ ಹಿಂದಿ ದಿವಸ ತರಹದ ಆಚರಣೆಗಳನ್ನು ಪುರಸ್ಕರಿಸುವಂತ
ಈಗಿನ ಬಾಶಾ ನೀತಿಯನ್ನು ಮುಲಾಜಿಲ್ಲದೇ ವಿರೋದಿಸಬೇಕು. ಎಲ್ಲ ಬಾಶೆಗಳನ್ನು ಗೌರವಿಸುವಂತ,
ಸ್ಥಳೀಯ ಜನರಿಗೆ ಅನೂಕೂಲಕರವಾಗುವಂತ, ಅನಿಯಂತ್ರಿತ ವಲಸೆಯನ್ನು
ತಡೆಯುವಂತ, ಪರಬಾಶಿಕರನ್ನು ಸ್ಥಳೀಯ ಬಾಶೆಯ ಮುಖ್ಯವಾಹಿನಿಗೆ ಬೆರೆಸುವಂತ
ಬಾಶಾ ನೀತಿಯನ್ನು ರೂಪಿಸಬೇಕಿರುವುದು ಬಾರತದಂತ ಒಕ್ಕೂಟಕ್ಕೆ ತುರ್ತಾಗಿ ಆಗಬೇಕಿರುವುದು.




