Friday 7 May 2010

ಶಂಖದಿಂದ್ ಬಂದ್ರನೇ ತೀರ್ಥ.................!!!







ಸುದ್ದಿ: ಹೊಗೆನಕ್ಕಲ್ ಯೋಜನೆ ಕುರಿತು ರಾಜ್ಯ ಸಂಸದರಿಂದ ಪ್ರದಾನ ಮಂತ್ರಿ ಭೇಟಿ........
ಅದರ ಕುರಿತು ಹಳ್ಳಿಯ ಒಂದು ಕಟ್ಟೆಯ ಮೇಲೆ ನಡೆದ ಒಂದು ಸಂವಾದದ ಕಿರುನೋಟ, (ಹಾಗೇ ಸುಮ್ಮನೆ).................


ಗುಂಡ: ಲೇ ತಿಮ್ಮ ಇವತ್ತಿನ್ ಪೇಪರ್ ನೋಡಿಯೇನ....?
ತಿಮ್ಮ : ಇಲ್ಲ ಯಾಕ..?

ಗುಂಡ: ನಮ್ಮ ಎಂಪಿಗೋಳು ನಿನ್ನೆ, ಹೊಗೆನಕ್ಕಲ್ ಸಮಸ್ಯೆ ಬಗಿ ಹರಸ್ರಿ ಅಂತ್ ಹೇಳಾಕ್ ಪ್ರದಾನಮಂತ್ರಿ ಅವರ್ನ್ ಭೆಟ್ಟಿ ಆಗ್ಯಾರಂತ್.
ತಿಮ್ಮ: ಹೌದಾ..!

ಗುಂಡ: ಹೌದಲೇ, ನಮ್ಮ ಎಂಪಿಗೋಳು ಎಲ್ಲಾರು ಪಕ್ಷಭೇಧ ಮರತು, ಎಲ್ಲಾರು ಸೇರಿ, ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಅಗ್ಯಾರಂತ್. ಇದು ಅಂದ್ರ್ ನೋಡಪಾ ನಮ್ಮ ಎಂಪಿಗೋಳು ಒಗ್ಗಟ್ಟ್ ಅಂದ್ರ. ತಮಿಳನಾಡಿನವ್ರಿಗಿ ಇನ್ ಮ್ಯಾಗ್ ಚಾಲೊ ಆಯ್ತ್ ನೋಡ್ ಮಾರಿ ಹಬ್ಬ. ನೀ ಎನಂತಿ..?
ತಿಮ್ಮ: ಲೇ ನಿಮ್ಮಾಯಿ, ಯಾವ ಜಗತ್ತಿನ್ಯಾಗ್ ಅದಿಯೋಲೆ ನೀ. ಇವತ್ತ್ ನಮ್ಮ ಎಂಪಿಗೋಳ್ ಎಲ್ಲಾರೂ ಸೇರಿ ದಿಲ್ಲಿಗಿ ಹೋಗಿ ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಆಗ್ಯಾರಂದ್ರ ಅದರ್ ಹಿಂದ್ ಎನೇನ್ ರಾಮಾಯಣ, ಮಹಾಭಾರತ್ ನಡೆದೈತಿ ಅಂತ್ ಗೊತ್ತೈತೇನ್...? ಇವತ್ತ್ ಇವರು ತಮ್ಮ ಉಟ್ಟ ಅರಿಬಿ ಮ್ಯಾಗ್, ದಿಲ್ಲಿಗಿ ಖಬರ್ ಹಾರಿ ಹೊಗ್ಯಾರ ಅಂದ್ರ ಅದಕ್ಕ ಯಾರ್ ಕಾರಣ ಅನ್ನೂದು ಗೊತ್ತೈತೇನ್..? ಸುಮ್ ಸುಮ್ನ ತಲಿ ಕೆಟ್ಟ್ಂಗ್ ಮಾತಾಡ್ತಿಲಾ. ಇವತ್ತ್ ಅವರ್ ದಿಲ್ಲಿಗಿ ಹೊಗ್ಯಾರ್ ಅಂದ್ರ ಅದಕ್ಕ ನಮ್ಮ ಕರವೇ ಕಾರಣಪಾ.

ಗುಂಡ: ಹೌದಾ..? ಖರೇನಾ...?
ತಿಮ್ಮ: ಹೂನೋ ಮಾರಯ್ಯ. ರಾಜ್ಯದ ಸಮಸ್ಯೆ ಬಂದಾಗ ಇವರ್ ಅಷ್ಟ ಒಗ್ಗಟ್ಟಾಗಿ ಇರ್ತಿದ್ರಪಾ ಅಂದ್ರ, ಹೊಗೆನಕ್ಕಲ್, ಬೆಳಗಾವಿ ಮತ್ ಎನೇನ್ ರಾಜ್ಯದ ಸಮಸ್ಯೆ ಅದಾವ್, ಎಲ್ಲ ನಾವ್ ಹುಟ್ಟುಕಿಂತ್ ಮದ್ಲ ಬಗಿ ಹರಿತಿದ್ವು. “ಇವ್ರು, ತಮ್ಮ್ ಹೈ ಕಮಾಂಡ್ ಪರ್ಮಿಷನ್ ಕೊಟ್ಟ್ ಮ್ಯಾಗೆ ಮುಂಜಾನಿ ಮಾಡು ದಿನನಿತ್ಯದ ಕೆಲಸಗಳನ್ನ್ ಮಾಡೊದು. ಇಲ್ಲ ಅಂದ್ರ್ ಇಲ್ಲ (ಅಷ್ಟೊಂದ್ ಪ್ರಾಮಾಣಿಕರು)”. ಇವ್ರ್ ಹಿಂಗ್ ಅದಾರ್ ಅಂತ್ ಹೇಳೆ ಅವು ಸಮಸ್ಯೆ ಇನ್ನೂ ಉಳ್ಕೊಂಡಾವ್. ಇವ್ ಹಿಂಗ್ ಮುಂದ್ ನಮ್ಮ್ ಮಕ್ಳು ಮೊಮ್ಮಕ್ಕಳ್ ಕಾಲದ ತನಕ ಮುಂದುವರಿಬಾರದು ಅಂತ್ ಹೇಳಿ, ನಮ್ಮ್ ಕರವೇ ಅವರು ಇದನ್ನ್ ಬಗಿಹರಿಸಬೇಕಂತ್ ಬೆನ್ನ್ ಹತ್ಯಾರ್. ನಮ್ ಎಂಪಿಗೋಳು ದಿಲ್ಲಿಗಿ ಹೋಗ್ಲಾಕು ಇವರು ಹಿಂದ್ ನಿಂತ್ ಕೀಲಿ ಕೊಟ್ಟಿದ್ದೆ ಕಾರಣ. ನಮ್ ಕರವೇ ದವ್ರು ಇವರ್ ಮನಿ ಮುಂದ್ ಧರಣೀ, ಪ್ರತಿಭಟನೆ ಮಾಡಿದ್ ಮ್ಯಾಗ್ ಇವ್ರಿಗಿ, ಬುಡಕ್ ಬೆಂಕಿ ಹತ್ತತು. ಅವಾಗ್ ಎಚ್ಚರ್ ಆದ್ರು. ಇವ್ರು ಕರ್ನಾಟಕನ ನಮ್ಮ್ ಮನಿ, ಅಂಥ್ ತಿಳ್ಕೊಂಡಿದ್ರ ಹಿಂಗ್ಯಾಕ್ ಆಗ್ತಿತ್ತು. ಆದ್ರ್ ಇವ್ರು ಹಂಗ್ ತಿಳ್ಕೊಂಡಿಲ್ಲ, ತಮ್ಮ ಮತಕ್ಷೇತ್ರ ಮಾತ್ರ ತಮ್ ಮನಿ(ಸ್ವಲ್ಪ ಮಂದಿ ಅದೂ ಇಲ್ಲ), ಉಳಿಕಿದ್ದು ಏನೂ ಸಂಬಂದ ಇಲ್ಲ, ಅನ್ನು ಹಂಗ್ ವರ್ತಿಸ್ತಾರ್. ತಮ್ಮ್ ಸ್ವಂತ ಮನಿಗಿ ಹಾನಿ ಆದಗ್ಲೇ ಇವ್ರಿಗಿ ಬುಡಕ್ಕ್ ಬೆಂಕಿ ಹತ್ತುದು, ಎಚ್ಚರ್ ಆಗುದು, ಉಟ್ಟ ಅರಿಬಿನ್ಯಾಗ್ ದಿಲ್ಲಿಗಿ ಹೋಗುದು. ಅಲ್ಲಿ ತನಕ ತಮ್ ತಮ್ಮ ಲೋಕದಾಗ್ ಇರ್ತಾರ್ ಇವ್ರು, ಬೆಳಗಾವಿಯರೇ ಹೋಗ್ಲಿ, ಹೊಗೆನಕ್ಕಲಾದ್ರು ಹೋಗ್ಲಿ. ವಿಧಾನಸೌದಕ್ಕ್ ಚಲೋ ರೇಟ್ ಬಂದ್ರ ಅದನ್ನೂ ಮಾರಿಬಿಡ್ತಾರ್, ಅಂತವ್ರು ಇವ್ರ್. ಇಂತವರ್ನ್ ಆರ್ಸಿದ್ದಕ್ಕ್ ನಮ್ಮ್ ಕೆರು ತೊಗೊಂಡ್ ನಾವೇ ಹೊಡ್ಕೊಬೇಕ್ ಅನಸ್ತೈತಿ...

ಗುಂಡ: ಹಂಗದ್ರ ಇವ್ರಿಗಿ ಅವಾಗವಾಗ್ ಕೀಲಿ ಕೊಟ್ಟ್ ಮುಂದ್ ನಡಸ್ಲಿಕ್ ಒಬ್ರು ಬೇಕು ಅಂದಂಗಾಯ್ತು.( ನಮ್ಮ್ ಮಕ್ಳು ಆಡು ಆಟಿಗಿ ಸಾಮಾನ್ ಇದ್ದಂಗ್, ಚಾವಿ ಕೊಟ್ಟ್ರ ಮುಂದ್ ಹೊಗ್ತಾವ್, ಇಲ್ಲ ಅಂದ್ರ್ ಇಲ್ಲ.)
ತಿಮ್ಮ: ಹೌದ್ ಹೌದ್. ನಮ್ಮ್ ಹಿರಿಯಾರ್ ಅದಕ್ಕ್ ಹೇಳ್ಯಾರ್, ಶಂಖದಿಂದ ಬಂದ್ರನೇ ತೀರ್ಥ ಅಂಥ. ಚಂದಂಗೆ ಹೇಳಿದ್ರ ಕೇಳುದಿಲ್ಲ ಇವ್ರು. ಒಟ್ಟಿನ್ಯಾಗ್ ಈಗಾದ್ರೂ ಎಚ್ಚರ ಆಗ್ಯಾರ್ ಅಷ್ಟೇ ಖುಶಿ. ಆದ್ರ್ ನಮ್ಮವ್ರು ಭಾಳ್ ಎಚ್ಚರಿಕೆಯಿಂದ್ ಇರ್ಬೇಕು, ಯಾಕ್ ಅಂದ್ರ್ ನಮ್ಮ್ ರಾಜಕಾರಣಿಗೋಳು "ಜನರ ಕಿವಿ ಮ್ಯಾಗ್ ನಮ್ಮ್ ಬೆಂಗಳೂರಿನ್ ಲಾಲಬಾಗ್ ಇಡ್ಲಾಕ್ ಎತ್ತಿದ್ ಕೈ". ಸುಮ್ ಸುಮ್ನ ಪೇಪರ್ನ್ಯಾಗ್ ಫೋಟೊ ಬರ್ಲಾಕ್ ಫೊಜ್ ಕೊಟ್ಟ, ಆಮೇಲಿ ಚಿನ್ನ ತಂಬಿ, ಬೆಳ್ಳಿ ತಂಬಿ, ತಾಮ್ರ ತಂಬಿ, ಕಬ್ಬಿಣದ ತಂಬಿ ಅಂಥ ಎಲ್ಲಾರೂ ಒಂದೊಂದ್ ತಂಬಿಗಿನ ಕೈಗ್ ಕೊಟ್ಟ್ರು ಅಂದ್ರ ನಾನು ನೀನು ಇಬ್ಬರೂ ಸೇರಿ ಗೋಳಗುಮ್ಮಟಕ್ಕ್ ಹೋಗಿ ಬಾಯಿ ಬಾಯಿ ಬಡ್ಕೊಬೇಕಾತೈತಿ.
ಹ್ಹಾ..............

LAST SIP: IMPORTANT QUOTE FROM ABRAHIM LINKON SUITS TO THE SITUATION.
“DEMOCRACY IS ELECTED BY FOOLS, AND RULING BY FRAUDS”.