Thursday 28 June 2012

ಬೆಸ್ಕಾಮ್ ನಲ್ಲಿ ಕಂಡ ಕನ್ನಡದ ಆಶಾಕಿರಣ


ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ನಗರದಲ್ಲೆಡೆ ವಿದ್ಯುತ್ ಉಳಿಸುವ ಕುರಿತು ಜಾಹೀರಾತು ಫಲಕಗಳನ್ನು ಹಾಕಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಜಾಹೀರಾತು ಕೇವಲ ಇಂಗ್ಲೀಶಿನಲ್ಲಿದ್ದು, 'ಸೇವ್ ಪವರ್' ಎಂದು ತೋರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕನ್ನಡದಲ್ಲಿದ್ದರೂ ಮೂಲ ಸಂದೇಶವನ್ನು ಇಂಗ್ಲೀಶಿನಲ್ಲಿ ಮಾತ್ರ ಕೊಡಲಾಗಿದೆ. ಇನ್ನು, ಕಂಟೋನ್ಮೆಂಟ್, ಮಾರತ್ ಹಳ್ಳಿ ಮತ್ತು ಅಲಸೂರು ನಂತಹ ಪ್ರದೇಶಗಳಲ್ಲಿ ಜಾಹೀರಾತು ಕೇವಲ ಇಂಗ್ಲೀಶಿನಲ್ಲಿದೆ. ಕುರಿತು ಬೆಸ್ಕಾಮ್ ಅದಿಕಾರಿಗಳಿಗೆ ಮಿಂಚೆ ಬರೆದಿದ್ದೆ. ಬೆಂಗಳೂರಿನಲ್ಲಿ ಆಡಳಿತ ಬಾಶೆ, ಪ್ರಾದೇಶಿಕ ಬಾಶೆ, ಜನರ ಬಾಶೆ ಎಲ್ಲವೂ ಕನ್ನಡವೇ ಆಗಿರುವುದರಿಂದ ಬಹುಪಾಲು ಜಾಹೀರಾತುಗಳನ್ನು ಕನ್ನಡದಲ್ಲೇ ಕೊಡುವುದು ಸರಿಯಾದ ನಡೆಯಾಗಿದೆ. ಕನ್ನಡ ಬಾರದವರಿಗಾಗಿ ಕೆಲವು ಇಂಗ್ಲೀಶ್ ಜಾಹೀರಾತುಗಳನ್ನು ಹಾಕಬಹುದು. ಆದರೆ ಕನ್ನಡ ಬಾರದವರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕನ್ನಡವನ್ನೇ ನಿರ್ಲಕ್ಶಿಸುವಂಥ ಕೆಲಸ ಆಗದಿರಲಿ ಎಂದು ಕೇಳಿಕೊಂಡಿದ್ದೆ. ಇಲಾಖೆಯಲ್ಲಿನ ಸೇವೆಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಶ್ಟಾನ ಮಾಡಿದಾಗ ಮಾತ್ರ ಅದು ಬೆಂಗಳೂರಿನ ಹೆಚ್ಚು ಜನರನ್ನು ತಲುಪಲು ಸಾದ್ಯ ಎಂಬ ಅಂಶವನ್ನು ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ನೀಡಿದ ಬೆಸ್ಕಾಮ್ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಮಣಿವಣ್ಣನ್ ಅವರು ಬೆಸ್ಕಾಮ್ ಕಾರ್ಯವ್ಯಾಪ್ತಿಯಲ್ಲಿ ಕನ್ನಡದ ಅನುಶ್ಟಾನವನ್ನು ಪರಿಣಾಮಕಾರಿಯಾಗಿ ಮಾಡಲು ಇಲಾಖೆಯಲ್ಲಿ ಒಂದು ಡಿ.ಜಿ.ಎಮ್ ಹುದ್ದೆಯನ್ನು ಸ್ರುಶ್ಟಿ ಮಾಡಲಾಗುವುದು ಎಂದು ಹೇಳಿದ್ದಾರೆ. ಮೂಲಕ ಇಲಾಖೆಯಲ್ಲಿ ಹೆಚ್ಚೆಚ್ಚು ಜನರು ತಮ್ಮ ಎಲ್ಲ ಕೆಲಸಗಳಲ್ಲಿ ಕನ್ನಡವನ್ನು ಬಳಸುವ ಹಾಗೆ ಮಾಡುವ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ : ಆದಾರದ ಮೇಲೆಯೇ ಎಲ್ಲ ಬೆಸ್ಕಾಮ್ ಸಾರ್ವಜನಿಕ ಸಂಪರ್ಕಗಳಲ್ಲಿ ಕನ್ನಡ-ಇಂಗ್ಲೀಶ್ ಜಾಹೀರಾತುಗಳನ್ನು ಕೊಡಲಾಗುವುದು ಎಂದು ತಿಳಿಸಿದರು.
ಅವರ ಉತ್ತರ ಹೀಗಿದೆ.
-------------------------------------------------------------------------------------------------------------------------

---------- Forwarded message ----------
From: P Manivannan
Date: 2012/6/19
Subject: Re:
ಕನ್ನಡದಲ್ಲಿ ಜಾಗ್ರುತಿ ಮೂಡಿಸಿ.
To: "Mahesh............."
Cc: GM Administration , general manager it and bescom , AE to MD BESCOM , gm ca


Dear All,

Please see the email below.

I would suggest that we create a post of DGM, who will be in-charge for ensuring that Kannada is used widely in all BESCOM activities. He can go thru the details given and send it to everybody else, so that more and more persons start using Kannada in all their activities (including me).

I have already issued a note that, the ratio of Kannada:English shall be maintained as 2:1 for every public communication of BESCOM. GM.Adm to issue a office order on that.

Thanks to M R Mahesh for his valuable suggestions, and for focusing the issue.

lets see if Google transliteration can help us.

best

Manivannan

Dhanyavadagalu

--
Managing Director
Bangalore Electricity Supply company.
www.bescom.org
--------------------------------------------------------------------------------------------------------------------------------------------------------------------------------------------

ಮಿಂಚೆಯಿಂದಲೂ ಬದಲಾವಣೆ ಸಾದ್ಯ.
ಹುದ್ದೆ ಸ್ರುಶ್ಟಿಸುವುದರಿಂದಾಗುವ ಲಾಬ ನಶ್ಟಗಳ ವಿಶಯ ಏನೇ ಇದ್ದರೂ ಕನ್ನಡದ ಅನುಶ್ಟಾನಕ್ಕಾಗಿ ಇಲಾಖೆ ವ್ಯಾಪ್ತಿಯಲ್ಲಿ ಒಂದು ಹುದ್ದೆ ಸ್ರುಶ್ಟಿಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ೧೯೬೩ ರಲ್ಲೇ ಕರ್ನಾಟಕ ಆಡಳಿತ ಬಾಶೆ ಕಾಯ್ದೆಯನ್ನು ಜಾರಿಗೆ ತಂದರೂ ಇನ್ನು ಅನೇಕ ಸರಕಾರಿ ಇಲಾಖೆಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಶ್ಟಾನ ಮಾಡದಿರುವುದನ್ನು ನೋಡಬಹುದಾಗಿದೆ. ಹಿನ್ನೆಲೆಯಲ್ಲಿ ಮಣಿವಣ್ಣನ್ ಅವರ ನಿರ್ದಾರ ಅಬಿನಂದನಾರ್ಹ ಮತ್ತು ಇತರ ಇಲಾಖೆಗಳಿಗೂ ಮಾದರಿಯಾಗಿದೆ. ಬೆಸ್ಕಾಮ್ ಸೇವೆ ಪಡೆದುಕೊಳ್ಳುವ ಗ್ರಾಹಕರಲ್ಲಿ ಇದು ಆಶಾಬಾವನೆ ಮೂಡಿಸಿದೆ. ಒಂದು ಮಿಂಚೆ ಬದಲಾವಣೆಗೆ ಕಾರಣವಾಗಿದ್ದು, ಕೇವಲ ಮಿಂಚೆಗಳಿಂದ ಬದಲಾವಣೆ ಸಾದ್ಯವೇ ಎಂಬ ಹಲವರ ಪ್ರಶ್ನೆಗೆ ಉತ್ತರ ನೀಡಿದ ಅನೇಕ ಪ್ರಕರಣಗಳ ಜೊತೆಗೆ ಪ್ರಕರಣವೂ ಸೇರಿಕೊಂಡಿದೆ. ನಮ್ಮ ಸುತ್ತ ಮುತ್ತಲಿನ ವ್ಯವಸ್ಥೆಯಲ್ಲಿ ಮಾಹಿತಿ, ಸೇವೆಗಳು ಕನ್ನಡದಲ್ಲಿ ಸಿಗುವಂತಾಗಲು ಗ್ರಾಹಕನ ಆಗ್ರಹವೇ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡದಲ್ಲಿ ಮಾಹಿತಿ, ಸೇವೆಗಳು ಸಿಗದಿದ್ದಾಗ ಅದನ್ನು ಆಗ್ರಹಿಸಿದರೆ ಖಂಡಿತ ಅಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಅನುಶ್ಟಾನದ ಪ್ರಯತ್ನಗಳು ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಬೆಸ್ಕಾಮ್ ಮತ್ತೊಂದು ಉದಾಹರಣೆಯಾಗಿದೆ.

Tuesday 19 June 2012

ಕನ್ನಡ ಸಮಾಜದ ಜನರಿಗೆ ಸೇವೆ ಕಡೆಗಣಿಸುವುದು ಸಾಮಾಜಿಕ ಹೊಣೆಗಾರಿಕೆ ಹೇಗಾಗುತ್ತದೆ.?


ಇತ್ತೀಚಿಗೆ ನಮ್ಮ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಮ್.ಟಿ.ಸಿ ಸಂಸ್ಥೆಗಳ ಬ್ಯಾಂಕ್ ಖಾತೆಯನ್ನು ೨೦೦೯-೧೦ ನೇ ಸಾಲಿಗೆ ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮುಟ್ಟುಗೋಲು ಹಾಕಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆಗಳು ನಮ್ಮದು ಉದಾರತೆಯ ತತ್ವದಡಿ ಕೆಲಸ ನಿರ್ವಹಿಸುವ ಸಂಸ್ಥೆಗಳಾಗಿದ್ದು, ಎರಡೂ ಸಂಸ್ಥೆಗಳು ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುತ್ತಿದೆ. ಅಷ್ಟೇ ಅಲ್ಲದೇ ಬಂದ ಲಾಭವನ್ನು ಹೊಸ ಬಸ್ ಸೇವೆಯನ್ನು ನೀಡುವುದಕ್ಕಾಗಿ ಬಳಸಲಾಗುತ್ತಿದೆ ಎಂದು
ಹೇಳಿಕೊಂಡಿದೆ. ಎಲ್ಲವೂ ಸರಿ. ಆದರೆ ಇಲ್ಲಿ ಪ್ರಶ್ನೆ ಏಳುವುದು, ಉದಾರತೆ ತತ್ವದಡಿ ಕೆಲಸ ನಿರ್ವಹಿಸುವ ಒಂದು ಲಾಭ ರಹಿತ ಸಂಸ್ಥೆಯಿಂದ ಒಳ್ಳೆಯ ಗುಣಮಟ್ಟದ, ಮಿತವ್ಯಯದ ಮತ್ತು ಗ್ರಾಹಕ ಸ್ನೇಹಿಯಾದ ಸೇವೆಯನ್ನೇ ಜನರು ನಿರೀಕ್ಷೀಸುತ್ತಾರೆ. ಸಂಸ್ಥೆಯ ದ್ಯೇಯೊದ್ದೇಶವು ಅದೇ ಆಗಿರಬೇಕಾಗುತ್ತದೆ.
ಹಾಗಾದರೆ ಸಮಸ್ಯೆ ಎಲ್ಲಿದೆ.?
ಬಿ.ಎಮ್.ಟಿ.ಸಿ ಯನ್ನು ಪಕ್ಕಕ್ಕಿಟ್ಟು ಕೆ.ಎಸ್.ಆರ್.ಟಿ.ಸಿ ಬಗ್ಗೆ ಮಾತ್ರ ಮಾತನಾಡುವುದಾದರೆ, ಉತ್ತಮ ಗುಣಮಟ್ಟದ ಸೇವೆಯಿಂದ ಲಾಭದಾಯಕ ಸಂಸ್ಥೆಯಾಗಿರುವ ಕೆ.ಎಸ್.ಆರ್.ಟಿ.ಸಿ. ಇಂದು ಪ್ರಯಾಣಿಕರಿಗೆ ಕೆಲವು ಹೈಟೆಕ್ ಸೇವೆ ಒದಗಿಸುತ್ತಿದ್ದು, ಸಂಸ್ಥೆಯ ಸಿಬ್ಬಂದಿ ತಮ್ಮ ಪ್ರವ್ರತ್ತಿ ಹಾಗೂ ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡಿದೆ. ಹೈಟೆಕ್ ಸೇವೆ ಮತ್ತದರ ಗುಣಮಟ್ಟದ ಸೇವೆಗಳಲ್ಲಿ ಹೆಚ್ಚಿನವು ಅಂತರಾಜ್ಯ ಊರುಗಳಿಗೆ ಲಭ್ಯವಿದ್ದು, ಮುಂಬೈ, ಚೆನ್ನೈ, ಹೈದರಾಬಾದ್, ಎರ್ನಾಕುಲಮ್ ನಂತಹ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದರ ಹೆಚ್ಚಿನ ಲಾಭ ದೊರೆಯುತ್ತಿದೆ ಎಂಬುದು ಒಂದು ಕಡೆಯಾದರೆ, ಹೈಟೆಕ್ ಸೇವೆ ಮೂಲಕ ಹೈಟೆಕ್ ಗ್ರಾಹಕರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಸಂಪರ್ಕ ಸಾಧನವಾಗಿ ಕೆ.ಎಸ್.ಆರ್.ಟಿ.ಸಿ ಯನ್ನೇ ನಂಬಿರುವ ಕೋಟ್ಯಂತರ ಮೂಲ ಕನ್ನಡ ಗ್ರಾಹಕರನ್ನು ಅದು ಮರೆತಿರುವುದು ಮತ್ತೊಂದು ಕಡೆ. ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದರೂ ಮೂಲ ಗ್ರಾಹಕರ ನುಡಿಯಾದ ಕನ್ನಡವನ್ನು ತಮ್ಮ ಸೇವೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದೆ. ಕರ್ನಾಟಕದ ಊರುಗಳ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸಬೇಕಾದ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದ ಸಂಪರ್ಕವನ್ನು ಹೆಚ್ಚು ಹೆಚ್ಚು ಸಾಧಿಸಲು ವಿಪರೀತ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಹೀಗಾಗಿ ಕರ್ನಾಟಕದ ಒಳಗಿನ ಸಂಪರ್ಕವನ್ನು ಗಟ್ಟಿಗೊಳಿಸುವ ಸಂಸ್ಥೆಯ ಮೂಲ ಉದ್ದೇಶವನ್ನೇ ಕಡೆಗಣಿಸಿದೆ. ಕರ್ನಾಟಕದ ಮಂದಿಗೆ ಒಳ್ಳೆಯ ಸೇವೆ ನೀಡಬೇಕು ಎಂಬ ಕಾಳಜಿಗಿಂತ ಮಾರುಕಟ್ಟೆ ವಿಸ್ತರಿಸಬೇಕು ಎಂಬ ಹಪಾಹಪಿನೇ ಇತ್ತೀಚಿಗೆ ಎದ್ದು ಕಾಣುತ್ತಿದೆ. ಇದರ ಪರಿಣಾಮವೇ, ಗುಣಮಟ್ಟದ ಬಸ್ಸುಗಳ ಸೇವೆ ರಾಜ್ಯದ ಅನೇಕ ಊರುಗಳಿಗೆ ಇಲ್ಲದಿರುವುದು, ಮೂಲಕ ರಾಜ್ಯದ ಜನರನ್ನು ಗುಣಮಟ್ಟದ ಸೇವೆಗಳಿಂದ ವಂಚಿತರನ್ನಾಗಿಸಿದೆ. ಇದು ಖಾಸಗಿಯವರಿಗೆ ದಾರಿ ಮಾಡಿಕೊಟ್ಟು, ಅವರು ಮನಬಂದಂತೆ ದರಗಳನ್ನು ವಸೂಲಿ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅಂತರಾಜ್ಯ ಸೇವೆ ಇರಕೂಡದು ಎಂಬುದು ವಾದವಲ್ಲ. ಕರ್ನಾಟಕದ ಒಳಗಿನ ಸೇವೆಯನ್ನು ಕಡಿತಗೊಳಿಸಿ, ಇಲ್ಲಿನ ಸೇವೆಯನ್ನು ನಿರ್ಲಕ್ಷಿಸಿ ಹೊರರಾಜ್ಯದ ಸಂಪರ್ಕವನ್ನು ವಿಸ್ತರಿಸುವುದು ಎಷ್ಟರ ಮಟ್ಟಿಗೆ ಸರಿ.? ಇನ್ನು, ಕರ್ನಾಟಕ ಸರಕಾರದ ಸಂಸ್ಥೆಯಾದರೂ ಅನೇಕ ಸೇವೆಗಳಲ್ಲಿ  ಕರ್ನಾಟಕ ಜನರ ಅನುಕೂಲದ ಬಾಶೆಯಾದ ಕನ್ನಡಕ್ಕೆ ಸ್ಥಾನ ಕಲ್ಪಿಸದೇ ಬಹುತೇಕ ಸೇವೆಗಳು ಇಂಗ್ಲೀಶಮಯವಾಗಿವೆ. ಸಂಸ್ಥೆಯ ಮಿಂಬಲೆ, ಮುಂಗಡ ಟಿಕೆಟ್ ಗಳಲ್ಲಿ (ಇತ್ತೀಚಿಗೆ ವಿಶೇಶ ಸೂಚನೆಗಳಲ್ಲಿ ಮಾತ್ರ ಕನ್ನಡವನ್ನು ಅಳವಡಿಸಲಾಗಿದೆ) ಕನ್ನಡ ಇಲ್ಲದಂತಾಗಿದೆ. ಬಸ್ಸುಗಳ ಮುಂಬಾಗದಲ್ಲಿ ಮೊದಲು ಕಾಣಿಸುತ್ತಿದ್ದ .ರಾ..ಸಾ. ಅನ್ನೋ ತಲೆಬರಹ ಕೂಡ ಇಂಗ್ಲೀಶಮಯವಾಗಿದೆ. ಹಾಗೆಯೇ ನಮ್ಮ ಊರುಗಳ ಹೆಸರುಗಳು ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಇಂಗ್ಲೀಶಿನಲ್ಲೂ 'Bengaluru, Mysuru, Hubballi  ಎಂದೇ ಆಗಿರಬೇಕು. ಅದು ಕೂಡ ಕಾಣಸಿಗುವುದಿಲ್ಲ. ಇನ್ನು, ಬಸ್ಸುಗಳಲ್ಲಿನ ಮನರಂಜನೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಹಿಂದೇಟು ಹಾಕುತ್ತಿರುವುದು ಕನ್ನಡೇತರ ಗ್ರಾಹಕರನ್ನು ಒಲಿಸಿಕೊಳ್ಳುವ ತಂತ್ರವಾಗಿ ಕಾಣುತ್ತಿದೆ. ಎಲ್ಲ ಸಂಗತಿಗಳು ಕೆ.ಎಸ್.ಆರ್.ಟಿ.ಸಿ ಹೇಳಿಕೊಂಡಿರುವ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಾಮಾಜಿಕ ಹೊಣೆಗಾರಿಕೆಯ ಮಾತುಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.


ಕರ್ನಾಟಕದ ಜನತೆಯ ನಿರೀಕ್ಷೆಗಳೇನು.? 
ಕೆ.ಎಸ್.ಆರ್.ಟಿ.ಸಿ. ಕರ್ನಾಟಕದ ಊರುಗಳ ನಡುವೆ ಉತ್ತಮ ಸಂಪರ್ಕ ಸಾಧನವಾಗಿ ಕನ್ನಡ ಜನರಿಗೆ ಗುಣಮಟ್ಟದ ಮತ್ತು ಮಿತವ್ಯಯದ ಸೇವೆ ನೀಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವಂಥ ಸಂಸ್ಥೆ. ಒಂದು ಲಾಭ ರಹಿತವಾದ ಉದಾರತೆಯ ಸಂಸ್ಥೆಗೆ ಇರಬೇಕಾದ ಗುಣಲಕ್ಷಣಗಳೇ ಇವು. ಸಂಸ್ಥೆಯಲ್ಲಿ ಲಭ್ಯವಿರುವ ಗುಣಮಟ್ಟದ ಸೇವೆಗಳೇ ಇವತ್ತು ಅನೇಕ ಪ್ರಶಸ್ತಿಗಳು ಸಂಸ್ಥೆಗೆ ಅರಸಿ ಬರುವ ಹಾಗೆ ಮಾಡಿವೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿವೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ರಾಜ್ಯದ ಜನರು ಸಂಸ್ಥೆಯಿಂದ ನಿರೀಕ್ಷಿಸುವುದು ಬರೀ ಹೆಮ್ಮೆ ಅಲ್ಲ. ಸಂಸ್ಥೆಯಲ್ಲಿ ನೀಡಲಾಗುವ ಸೇವೆಗಳಿಂದ ತಮಗಾಗುವ ಅನುಕೂಲಗಳನ್ನು ಜನರು ಹೆಚ್ಚು ನಿರೀಕ್ಷಿಸುವುದು. ಸಂಸ್ಥೆಯಲ್ಲಿನ ವ್ಯವಸ್ಥೆ ಗ್ರಾಹಕರ ನುಡಿಯಾದ ಕನ್ನಡದಲ್ಲಿದ್ದಾಗ ಮಾತ್ರ ಹೆಚ್ಚೆಚ್ಚು ಜನರಿಗೆ ಅದರಿಂದ ಅನುಕೂಲವಾಗಲು ಸಾದ್ಯ. ಹೀಗಾಗಿ ಸಂಸ್ಥೆಯಲ್ಲಿನ ಎಲ್ಲ ಸೇವೆಗಳು ಕನ್ನಡದಲ್ಲಿ ದೊರೆಯುವಂತಾಗಲಿ. ಇನ್ನು, ಬಸ್ಸುಗಳಲ್ಲಿನ ಮನರಂಜನೆ (ಒಂದು ವೇಳೆ ಲಭ್ಯವಿದ್ದರೆ) ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತಾಗಲಿ. ಕೊನೆಯದಾಗಿ, ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗಿಂತ, ಲಾಭದ ಚಿಂತೆಗಿಂತ ಕನ್ನಡ ಜನರಿಗೆ ಗುಣಮಟ್ಟದ ಮತ್ತು ಗ್ರಾಹಕ ಸ್ನೇಹಿ ಸೇವೆ ನೀಡುವ ಮೂಲಕ ಕರ್ನಾಟಕದ ಊರುಗಳ ನಡುವಿನ ಸಂಪರ್ಕವನ್ನು ಪರಿಣಾಮಕಾರಿಯಾಗಿಸುವುದೇ ಸಂಸ್ಥೆಯ ಮೊದಲ ಆದ್ಯತೆ ಆಗಬೇಕು ಎಂಬುದು ಸಂಸ್ಥೆಯ ಗ್ರಾಹಕರಾದ ನಮ್ಮ ನಿರೀಕ್ಷೆಯಾಗಿದೆ.