Tuesday 3 August 2010

ನಮ್ಮ ಬೇಲಿಗಳಿಗೆ ಹೊಲದ ಬಗ್ಗೆ ಕಾಳಜಿನೇ ಇಲ್ಲ...!














ಎಲ್ಲರಿಗೂ (ತಡವಾಗಿಯಾದರೂ) ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

ನಮ್ಮ ಹೊಲವನ್ನು ಕಾಯಬೇಕಾದ ಬೇಲಿಯೇ ಹೊಲವನ್ನು ಮೈಯ್ಯಲು ನಿಂತಂತಿದೆ, ಮದ್ಯದಲ್ಲಿರುವ ಈ ಚಿತ್ರ. ಇದು ಕನ್ನಡಪ್ರಭದಲ್ಲಿ ಬಂದ ಲೇಖನ. ಕನ್ನಡಪ್ರಭ ಎಂದರೆ ಅಲ್ಲಿ ನಾವು ತಿಳಿದೋ ತಿಳಿಯದೇನೊ ಆ ಹೆಸರಿನ ಮೂಲಕ ಅಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಕಾಣುತ್ತೇವೆ. ಆದರೆ ಮೊನ್ನೆ ಮುಗಿದ ಸ್ನೇಹಿತರ ದಿನಾಚರಣೆಯ ಬಗ್ಗೆ ಮರುದಿನ ಅಂದರೆ ನಿನ್ನೆ (೦೨-೦೮-೧೦) ಪ್ರಕಟವಾದ ಲೇಖನ ಜನರ ತಲೆಕೆಡಿಸಿ, ಕನ್ನಡಿಗರ ತಲೆಯಲ್ಲಿ ವಿವಿಧ ತಳಿಯ "ಹಿಂದಿ ಹುಳ" ಬಿಡುವ ಪ್ರಯತ್ನದ ಭಾಗವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಸ್ನೇಹಿತರ ದಿನದ ಬಗ್ಗೆ ವರ್ಣಿಸಲು ಕನ್ನಡಪ್ರಭ ಎಂಬ ಹೆಸರಿಟ್ಟುಕೊಂಡಿರುವ ಇವರಿಗೆ ಕನ್ನಡದಲ್ಲಿ ವಾಕ್ಯಗಳೇ ಸಿಗಲಿಲ್ಲವೇ. ಹಿಂದಿಯನ್ನು ಕಷ್ಟ ಪಟ್ಟು, ಕನ್ನಡದಲ್ಲಿ ಬರೆದರೇ ಅದನ್ನು ಕನ್ನಡಿಗರು ಬಿಟ್ಟು ಬಿಹಾರಿ ಬಾಬು ಓದಲು ಸಾದ್ಯವೇ.? ಕನ್ನಡಿಗರೇ ಓದುವಾಗ ಅಲ್ಲಿ ಹಿಂದಿಗೇಕೆ ಮಣೇ. ಹಿಂದಿಯನ್ನು ಕಲಿಸುವ ಕಾಂಟ್ರ್ಯಾಕ್ಟ ಯಾಕೆ ಬೇಕು ಇವರಿಗೆ.
ಅದನ್ನು ಓದಿದ ಮೇಲೆ ಖಂಡಿತ ಅದರ ಅರ್ಥ ಗೊತ್ತಿರದವನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಇಲ್ಲಿಂದ ಶುರು ಆಗುತ್ತೆ ನೋಡಿ, ಹಿಂದಿ ಬೀಜಕ್ಕೆ ನಿರುಣಿಸುವ ಪ್ರಯತ್ನ. ಇದರ ಮುಂದುವರಿದ ಭಾಗವಾಗಿ "ಹಿಂದಿ ಮಾತಾಡಿದವನು ಕೂಲ್ ಮತ್ತು ಕನ್ನಡ ಮಾತಾಡುವವನು ಫೂಲ್" ಎಂಬ ಉದ್ದಟತನದ, ನಿರಾಭಿಮಾನದ ಕೀಳರಿಮೆ ಅವನಲ್ಲಿ ಮೊಳಕೆಯೊಡೆಯುತ್ತದೆ.
ಹಿಂದಿ ಪ್ರಚಾರಕರಿಗೆ ಹಿಂದಿ ಜ್ವರ ವಿಪರಿತವಾಗುವುದು ಸೆ. ೧೫ ರ ಆಸು ಪಾಸಿನ ದಿನಗಳಲ್ಲಿ ಮತ್ತು ಅವಾಗವಾಗ. ಆದರೆ ಈ ಟಿವಿವಾಹಿನಿಗಳು ಮತ್ತು ಅವರ ಕಾರ್ಯಕ್ರಮಗಳು, ಪತ್ರಿಕೆಗಳು, ಕೇಂದ್ರ ಸರಕಾರದ ಸಂಸ್ಥೆಗಳಿಗೆ ೨೪*೭ ಮೈ ಬೆಚ್ಚಗೆ ಇರುತ್ತದೆ, ಯಾವಾಗ ಹಿಂದಿ ಜ್ವರ ಬರುತ್ತದೋ ಗೊತ್ತೆ ಆಗೋದಿಲ್ಲ. ಕನ್ನಡದ ಹೊಲವನ್ನು ಕಾಯಬೇಕಾದ ಬೇಲಿಗಳೂ ಇದರಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸವೇ ಸರಿ.

ಈ ನಿಟ್ಟಿನಲ್ಲಿ ಇದರ ಬಗ್ಗೆ ಅವರ ಗಮನ ಸೆಳೆಯುವ ಒಂದು ಪ್ರಯತ್ನ ನಾವ್ಯಾಕೆ ಮಾಡ್ಬಾರದು..?
ಅವರಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಇಲ್ಲಿ ಮಿಂಚಿಸಿ.
kpnetdivision@gmail.com